ಮೈಸೂರಿನ ಕಾರಂಜಿ ಕೆರೆಯ ಪಕ್ಷಿಗಳ ಪಂಜರದಲ್ಲಿ ನನ್ನ ಕಣ್ಣಿಗೆ ಬಿದ್ದ ಶ್ವೇತ ಮಯೂರ. ನನಗೆ ಇದು ನಿಜವೇ ಅನ್ನಿಸಿತು. ಬಿಳಿ ನವಿಲು ಇರುವುದು ಎಂಬ ವಿಷಯ ಅರಿಯದವನಾಗಿದ್ದೆ.
[ಶ್ವೇತ, ನಿನ್ನ ಗರಿ ತೋರ್ಸಮ್ಮ!]
"ದೇಶ ಸುತ್ತು... ಕೋಶ ಓದು.." ಜ್ಞಾನ ಪಡೆದುಕೊ.
ಈ ಮಾತು ಸತ್ಯ ಅಲ್ವಾ?
Sunday 30 March, 2008
ಶ್ವೇತ ಮಯೂರ
Posted By ಅಂತರ್ವಾಣಿ at 12:17 pm 4 ಜನ ಸ್ಪಂದಿಸಿರುವರು
ವಿಭಾಗ: ಲೇಖನಗಳು
Saturday 29 March, 2008
Mall @ Malleshwara
ಕಳೆದ ಶುಕ್ರವಾರ, ನಗರದ ಮಲ್ಲೇಶ್ವರದಲ್ಲಿ ನೂತನವಾಗಿ ಒಂದು ಬಟ್ಟೆಯ ಮಳಿಗೆ ಪ್ರಾರಂಭಗೊಂಡಿತ್ತು. ನನಗೂ ಹೊಸ ಬಟ್ಟೆ ಖರೀದಿಸುವ ಆಸೆ , ವಿದ್ಯಾರಣ್ಯಪುರದಲ್ಲಿ ಬಸ್ ಹತ್ತಿ, ಮಲ್ಲೇಶ್ವರದಲ್ಲಿ ಇಳಿದೆ. ಸಂಪಿಗೆ ರಸ್ತೆಯಲ್ಲಿ ಇದ್ದ ಆ ಮಳಿಗೆಯನ್ನು ಹುಡುಕಿದೆ.
ಅಲ್ಲಿ, ಅಂಗಡಿ ಮುಂದಿದ್ದ ಆಕರ್ಷಕವಾದ ಫಲಕ ನನ್ನ ಕೈ ಬೀಸಿ ಕರೆಯಿತು. ಅದು ಈ ರೀತಿ ಹೇಳಿತು. "ಇಲ್ಲಿ ವಿದೇಶೀ ಬಟ್ಟೆಗಳು ಅತಿ ಕಡಿಮೆ ದರದಲ್ಲಿ ಸಿಗುವುದು ಹಾಗು 2 ಷರ್ಟಿಗೆ 1 ಪ್ಯಾಂಟು ಉಚಿತ". ಸರಿ, ಒಳಗೆ ಹೋದೆ. ಬಾಗಿಲ ಬಳಿಯೇ ಒಬ್ಬ ಎದುರಾದ. ಅವನ ಕೈಯಲ್ಲಿ ಕೆಲವು ಹಾಳೆಗಳು ಇದ್ದವು. ಅವನು ನನಗೆ ಆ ಹಾಳೆಯನ್ನು ಕೆಲವು ಮಾಹಿತಿಯೊಂದಿಗೆ ತುಂಬುವಂತೆ ಹೇಳಿದ. ಕೊನೆಯಲ್ಲಿ ಸಹಿ ಹಾಕಿ ಅಂದ. ನಾನು,ಇದೊಂದು ಸಮೀಕ್ಷೆ ಇರಬಹುದು ಎಂದು ತಿಳಿದೆ. ಕಣ್ಣಿಗೆ ಕಾಣಿಸದ ಹಾಗಿರುವ ಅಕ್ಷರಗಳಿಂದ ಕೂಡಿದ ಮಾಹಿತಿಯು ಇತ್ತು. ನಾನು ಯಾವುದನ್ನೂ ಓದದೆ ಸಹಿ ಹಾಕಿದೆ.
ನನ್ನ ವಿಚಾರಿಸೋದಕ್ಕೆ ಅಂಗಡಿ ಹುಡುಗ ಬಂದ. ನಾನು ಅವನಲ್ಲಿ ಕೇಳಿದೆ, "ಷರ್ಟ್ ಅಳತೆ 40 , ಪ್ಯಾಂಟ್ ಅಳತೆ 32, ಇದಕ್ಕೆ ಬಟ್ಟೆ ತೋರಿಸು". ಅದಕ್ಕೆ ಅವನು, "ಸಾರ್, ಇಲ್ಲಿ 150 ದೇಶದ ಬಟ್ಟೆಗಳು ಇವೆ. ನಿಮಗೆ ಯಾವ ದೇಶದ ಬಟ್ಟೆ ಬೇಕು?". ಆಗ ನಾನು,"2 - 3 ದೇಶದ ಬಟ್ಟೆಗಳನ್ನು ತೋರಿಸು ಅದರಲ್ಲಿ ನಾನಗೆ ಬೇಕಾದದ್ದನ್ನು ಕೊಳ್ಳೂತ್ತೇನೆ". "ನಮ್ಮ ಗೋದಾಮಿನಿಂದ ತರ್ತೀನಿ ಸಾರ್, ಸ್ವಲ್ಪ ಸಮಯ ಆಗುತ್ತೆ. ಇಲ್ಲೆ ಇರಿ" ಅಂದ.
ತುಂಬಾ ಸಮಯ ಕಳೆದರೂ ಹೋದ ಹುಡುಗ ಬರಲೇ ಇಲ್ಲ. ಬೇರೆ ಅಂಗಡಿಗೆ ಹೋಗುವ ನಿರ್ಧಾರ ಮಾಡಿದೆ. ಅಷ್ಟರಲ್ಲಿ ಅಲ್ಲಿದ್ದ ಇನ್ನೊಬ್ಬ, "ಹಾಗೆ ಆಗೋದಿಲ್ಲ ಸಾರ್, ನೀವು ಬಾಗಿಲ ಬಳಿ ಸಹಿ ಹಾಕಿದೀರ, ಅದರಂತೆ ಒಂದು ಜೊತೆ ಬಟ್ಟೆ ಖರೀದಿಸಿಯೇ ಇಲ್ಲಿಂದ ಹೋಗ್ಬೇಕು". ನಾನು ಏನು ಮಾತಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ನಂತರ ಅವನು, "ನೀವು ಪಕ್ಕದಲ್ಲೇ ಇರುವ ನಮ್ಮ ಉಪಾಹಾರ ಮಂದಿರಕ್ಕೆ ಹೋಗಿ, ತಿಂಡಿ, ಕಾಫಿ, ಮುಗಿಸಿ ಬನ್ನಿ, ಅಷ್ಟರಲ್ಲಿ ನಿಮಗೆ ಸೂಕ್ತವಾದ ಬಟ್ಟೆ ಬಂದಿರುತ್ತ " ಅಂದ. "ಅದ್ಯಾಕ್ಕೆ? ನಾನು ಇಲ್ಲೆ ಇರ್ತೀನಿ" ಅಂದೆ. ಅದಕ್ಕೆ ಅವನು, ನಾನು ಸಹಿ ಮಾಡಿದ ಹಾಳೇ ಇದೆ, ಅದರಂತೆ ನಡೆದುಕೊಳ್ಳದಿದ್ದರೆ, ಕೋರ್ಟಿನಲ್ಲಿ ಕೇಸೆ ಹಾಕಬಹುದು ಅಂದ. ನಾನು ದಿಗ್ಭ್ರಾಂತನಾದೆ. ಬೇರೆ ದಾರಿಯಿಲ್ಲದೆ ಆ ಉಪಾಹಾರ ಮಂದಿರಕ್ಕೆ ಹೋದೆ.
ಅಲ್ಲಿ, ಟೇಬಲ್ಲಿನಲ್ಲಿ ಕುಳಿತು, ದೋಸೆಯನ್ನು ತರುವಂತ ಸಪ್ಲೈಯರ್ಗೆ ಹೇಳಿದೆ. ಅವನು, ಸ್ವಲ್ಪ ಹೊತ್ತಿನಲ್ಲೇ ಬಂದು ಒಂದು ಹಾಳೆಯನ್ನು ಮುಂದೆ ಇಟ್ಟ. "ನಾನು ಕೇಳಿದ್ದು ದೋಸೆ, ನೀನೇನು ಕೊಡ್ತಾಯಿರೋದು?". "ಇದು ಪದಬಂಧ ಸಾರ್. ನೀವು ಇದನ್ನ ಉತ್ತರಿಸಿ. ಸರಿಯಾದ ಉತ್ತರಕ್ಕೆ ಬಹುಮಾನವಿದೆ."
ಬೇಡವಾದ ಮಾತುಗಳನ್ನು ಕೇಳಿ ಕೇಳಿ ನನ್ನ ಪಿತ್ತ ಈಗಾಗಲೇ ನೆತ್ತಿಗೇರಿತ್ತು. ಎಲ್ಲರ ಮೇಲಿನ ಕೋಪ ಇವನ ಮೇಲೆ ತಿರಿಸೋಣ ಎಂದು, "ಯಾಕಪ್ಪ ಹೇಗಿದೆ ಮೈಗೆ?" ಅಂದಾಗ, ಅವನು ಮತ್ತೆ ಆ ಒಪ್ಪಂದದ ಬಗ್ಗೆ ಹೇಳಿದ. ಮರು ಮಾತನಾಡದೆ, ನಾನು ಅದನ್ನು ಬಿಡಿಸೋಕೆ ಕೂತೆ. ಕೆಲವೇ ಕ್ಷಣಗಳಲ್ಲಿ ಅದನ್ನು ಬಿಡಿಸಿದೆ. ತಕ್ಷಣ ಅವನು ದೋಸೆ ತಂದು ಕೊಟ್ಟ. ದೋಸೆಯು ಆಯ್ತು. ಬಿಸಿ ಬಿಸಿ ಕಾಫಿಯು ಆಯ್ತು. ಪುನಃ ಬಂದೆ ನನ್ನ ಬಟ್ಟೆ ಕೊಂಡುಕೊಳ್ಳಲು.
ಬಟ್ಟೆ ತರಲು ಹೋಗಿದ್ದ ಹುಡುಗ ಆಗಲೆ ಬಂದು ನನ್ನ ಎದುರು ನೋಡುತ್ತಿದ್ದ. ಹೋದ ತಕ್ಷಣವೇ ಅವನು "ಸಾರ್, ನಿಮಗೆ ಹೊಂದುವ ಬಟ್ಟೆಗಳು ಇಲ್ಲಿ ಇವೆ ನೋಡಿ" ಅಂದ. ನೋಡಿದರೆ.. ಅವ್ಯಾವೂ ವಿದೇಶೀ ಉಡುಪು ತರಹ ಕಾಣಿಸಲಿಲ್ಲ! ಆದರೂ ಏನೋ ಖರೀದಿಸಲೇ ಬೆಕಲ್ವಾ ಅಂತ 2 ಷರ್ಟ್ ಆರಿಸಿದೆ. ಅವನಿಗೆ ಪ್ಯಾಂಟ್ ಉಚಿತ ಅಲ್ವ ಅದನ್ನು ಕೊಡು ಅಂತ ಕೇಳಿದೆ. ಅದಕ್ಕೆ ಅವನು, ಒಂದು ಜೀನ್ಸ್ ತೋರಿಸಿದ. ಅದನ್ನು ಬಿಡಿಸಿ ನೋಡಲು ಸುಮಾರು ೨೫ ತೇಪೆಗಳಿದ್ದವು. "ಯಾವುದೋ ಹಳೆ ಪ್ಯಾಂಟಿಗೆ ತೇಪೆ ಮಾಡಿರೋ ಹಾಗೆ ಇದೆ "ಅಂದೆ, ಆಗ ಅವನು, "ಇದು ಲೇಟೆಸ್ಟ್ ಫ್ಯಾಶನ್ ಸಾರ್"ಅಂತ ಹೇಳಿ ನನ್ ಬಾಯಿ ಮುಚ್ಚಿಸಿದ.
ಕೊನೆಗೆ ಆ ಬಟ್ಟೆ ಪ್ಯಾಕ್ ಮಾಡಿಸಿ, ಮನೆಗೆ ತೆಗೆದುಕೊಂಡು ಬರಲು ಸಿದ್ಧನಾದೆ. ಅಷ್ಟರಲ್ಲಿ ಅಮ್ಮ ಬಂದು," ಮಗೂ! 6.15 ಆಯ್ತು, ಆಫೀಸ್ ಗೆ ಹೋಗಲ್ವಾ?" ಅಂತ ಎಚ್ಚರಿಸಿದಾಗಲೇ ತಿಳಿಯಿತು ನಾ ಕಂಡಿದ್ದು ಕನಸು ಅಂತ.
ಎದ್ದ ತಕ್ಷಣ ನನ್ನ ಮನದಲ್ಲಿದ್ದ ಆತಂಕವೆಲ್ಲಾ ಮಾಯವಾಯಿತು. ಸದ್ಯ! ಆ ತೇಪೆ ಪ್ಯಾಂಟ್ ಧರಿಸಿ ಊರೆಲ್ಲಾ ತಿರುಗಾಡುವಂತಿಲ್ಲವಲ್ಲ ಅಂತ.
Posted By ಅಂತರ್ವಾಣಿ at 11:45 am 9 ಜನ ಸ್ಪಂದಿಸಿರುವರು
Thursday 27 March, 2008
ಮರುಳು ಮಾತುಗಳು
ಪದಗಳಿಲ್ಲ ನಿನ್ನ ಕಂಗಳ ವರ್ಣಿಸಲು,
ದೃಷ್ಟಿ ಹೋಗಿ ಕುರುಡನಾದೆ!
ಕೇಳಲಿಲ್ಲ ನಿನ್ನ ಪಿಸು ಮಾತುಗಳ
ಸುಮ್ಮನೆ ಸೋತು ಹೋದೆ!
ನಿನ್ನ ತುಟಿಯ ಜೇನ ಸವಿಯದೆ
ನೀಡು ನೀ ಸುಧೆಯ!
Posted By ಅಂತರ್ವಾಣಿ at 9:54 pm 4 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಪ್ರಣಯವಾಣಿ (Romantic )
Wednesday 26 March, 2008
ಪ್ರೇಮ - ಪರೀಕ್ಷೆ
ಬೆಂಬಿಡದೆ ಹಿಂಬಾಲಿಸಿದೆ
ದಟ್ಟ ಇರುಳಿನಲಿ,
ಅತಿಯಾದ ಭೀತಿಯಿಂದ
ನಿನ್ನ ಕಾಣಲು
ಮಾಯವಾಯಿತು ಭೀತಿ
ನಿನ್ನ ಕಂಡ ಮೇಲೆ
ಎಂಥಾ ಪ್ರಶ್ನೆಯೇ ಎದುರಾಗಲಿ
ಉತ್ತರಿಸುವೆ ಭಯವಿಲ್ಲದೆ
ವಿ. ಸೂ: ಇದು ದ್ವಂದ್ವಾರ್ಥವಿರುವ ಕವನ. ಚಿಕ್ಕ ಪ್ರಯತ್ನ ಅಷ್ಟೆ.
ಪ್ರೇಮ: ಹುಡುಗಿಯ ಹಿಂದೆ ಅಲೆಯುವ ತರುಣನ ಕುರಿತಾದ ಪಲ್ಲವಿ. ಚರಣದಲ್ಲಿ, ಆತನ ಪ್ರೇಮ ಫಲಿಸಿರುತ್ತೆ. ಯಾರ ಮುಂದೆಯಾದರೂ ಅದನ್ನು ಹೇಳುವ ಧೈರ್ಯವಿರುತ್ತೆ ಅವನಲ್ಲಿ.
ಪರೀಕ್ಷೆ: ಪಲ್ಲವಿಯಲ್ಲಿ, ಪರೀಕ್ಷೆಗೆ ಸಿದ್ಧನಾಗುತ್ತಿರುವ ಹುಡುಗನ ಕುರಿತು ಬರೆದಿದ್ದೇನೆ. (ರಾತ್ರಿ ವೇಳೆಯಲ್ಲಿ ಪುಸ್ತಕ ಓದೋದು). ಚರಣದಲ್ಲಿ, ಆತ ಪರೀಕ್ಷೆಗೆ ಸಿದ್ಧನಾಗಿರ್ತ್ತಾನೆ.
Posted By ಅಂತರ್ವಾಣಿ at 10:27 pm 4 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಪ್ರಣಯವಾಣಿ (Romantic )
Tuesday 25 March, 2008
ಕುಂಟೆ ಬಿಲ್ಲೆ
[ಬಾಲ್ಯದ ನೆನಪು ಪದೇ ಪದೇ ಕಾಡುತ್ತೆ. ಹಾಗೆ ನೆನೆಸಿಕೊಂಡು ಬರೆದೆ.]
ಶಾಲೆ ಮುಗಿಸಿ ಬಂದ ಮೇಲೆ
ಆಡುತ್ತಿದ್ದೆ ಕುಂಟೆ ಬಿಲ್ಲೆ !
ಗೆಳೆಯ, ಗೆಳತಿಯರನ್ನು ಒಂದೆಡೆ ಸೇರಿಸಿ
ಸಿದ್ಧ ಪಡಿಸಿದೆವು ಎಂಟು ಚೌಕದ ಆಟದ ಮನೆಯನ್ನು
ಹೆಸರಿಸಿದೆವು ಇದಕ್ಕೆ ಏರೋಪ್ಲೇನು ಎಂದು
ಕರೆದೆವು "ಬಚ್ಚೆ"ಎಂದು ಇದನ್ನು
ನಿರ್ಣಯಿಸಿದೆವು ಆಟದಲ್ಲಿ ನಮ್ಮ ಸರದಿಯನ್ನು
ಕುಂಟುತಾ ಸುತ್ತಿದೆವು ಉಳಿದೆಲ್ಲಾ ಮನೆಯ,
ಮುಗಿಸಿದೆವು ನಮ್ಮ ಆಟವನ್ನು.
Posted By ಅಂತರ್ವಾಣಿ at 12:06 pm 5 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
Tuesday 18 March, 2008
ಆತ್ಮಹತ್ಯೆ
[ಕೆಲವು ದಿನಗಳ ಹಿಂದೆ ಬರೆದೆ ಈ ಕವನ. ಅದನ್ನು ಇಂದು ಪ್ರಕಟಿಸಬೇಕೆಂದು.. ಗೂಗಲ್ ಟಾಕ್ ನಲ್ಲಿ "Love Failure.. committing suicide tonight" ಅಂತ ಹಾಕಿದ್ದೆ. ಇದನ್ನು ನೋಡಿದ ನನ್ನ ಮಿತ್ರ ಯುವಕನ ಆತ್ಮಹತ್ಯೆ ಬಗ್ಗೆ ಹೇಳಿದ. ನಾನು ಅದರಿಂದ ಸ್ಪೂರ್ತಿ ಪಡೆದು ಆ ಸಲುಗಳನ್ನು ಹಾಕಿದ್ದೇನೆಂದು ಭಾವಿಸಿದ್ದ. ಇವತ್ತು ನಿಜಕ್ಕು ಇದು ನನಗೆ ಆಶ್ಚರ್ಯ ತಂದಿತು.]
ಹೊತ್ತು ಮುಳುಗುವುದ ಕಾದು
ಹೆತ್ತವರಿಗೂ ತಿಳಿಸದೇ
ಹೊರಟೆನು ಕಡಲ ತೀರಕೆ
ಹೆಣವಾಗಿ ಬರಲು!
ಎದೆಗಾಗಿದೆ ಇಂದು ಬೇಸರ
ಪ್ರೇಮ ವೈಫಲ್ಯದಿಂದ!
ಸಾವೊಂದೇ ಉಳಿದಿರುವ ಗತ್ಯಂತರ
ಸಾಗರದೆಡೆಗೆ ಸಾಗಿದೆ ಸಂಕಟದಿಂದ!
ಸಾಗರವೇ! ನಿನ್ನ ಅಗಲವಾದ
ಕೈಗಳಿಂದ ಬಾಚಿ ನನ್ನ ಅಪ್ಪಿಕೊ
ಕೈಗಳ ಬಿಡದೇ ಹಾಗೆ ನನ್ನ ಎಳೆದುಕೊ
ಹೋಗಲಿ ಪ್ರಾಣ! ಅವಳಿಲ್ಲದ ಜೇವನವೇಕೆ?
ಪೋರನೆ! ಮೇಲೆ ನೋಡು ಪೂರ್ಣ ಚಂದಿರನು,
ನನಗಾಗೆ ಕಾದಿಹನು ಪಕ್ಷದಿಂದ
ಈ ಮಧುರ ಕ್ಷಣಕ್ಕಾಗಿ
ನನ್ನ ಅವನ ಮಿಲನಕ್ಕಾಗಿ!
ನಾನೀಗ ಉಕ್ಕಿಬರುವ ಸಮಯ
ನಿನ್ನ ನುಡಿಯಾಲಿಸಿದೊಡನೆ
ಬದಲಿಸಿದೆ ನನ್ನ ಹೃದಯ
ಶಾಂತಳಾದೆನು ಸುಮ್ಮನೆ!
ಜೀವಿಸು ನಿನಗಾಗಿ; ನಿಮ್ಮವರಿಗಾಗಿ
ಮರೆತೆಯಾ ನಿನ್ನ ಹಡೆದವರ?
ನಿನ್ನ ಸಾಕಲು ಅವರು ಪಟ್ಟ ಕಷ್ಟಗಳಾ?
ಹೋಗು ಮನೆಗೆ ಸಂತೋಷವಾಗಿ
ಸಾಗರ! ಅವಳಿಲ್ಲದ ಬದುಕೂ ಬದುಕೆ
ನಿನ್ನಿಂದಾಯಿತು ಬದುಕುವ ಬಯಕೆ!
ಎದೆಗಾಯಿತು ಇಂದು ಸಂತಸ
ಕಳೆದೆ ನನ್ನ ಜೀವನದ ತಾಮಸ!
ಸೂಚನೆ: "ಪ್ರಾಣವು, ದೇವರ ಇಚ್ಛೆಯೆಂತೆ ಹೋಗಬೇಕು. ನಿಮ್ಮಿಚ್ಛೆಯಿಂದ ದೇವರಿಗೆ ಕೊಡಬೇಡಿ".
Posted By ಅಂತರ್ವಾಣಿ at 10:14 pm 5 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಪ್ರಣಯವಾಣಿ (Romantic ), ವಿಶೇಷ ಕವನಗಳು
Wednesday 12 March, 2008
ಸಂಧ್ಯಾ - ಸುಖ ಜೀವನ
(ಮುಗಿಯಿತು)
Posted By ಅಂತರ್ವಾಣಿ at 10:29 pm 2 ಜನ ಸ್ಪಂದಿಸಿರುವರು
ವಿಭಾಗ: ಲೇಖನಗಳು
ಸಂಧ್ಯಾ - ಅಜ್ಜಿಯ ಮಡಿಲು
Posted By ಅಂತರ್ವಾಣಿ at 9:54 pm 4 ಜನ ಸ್ಪಂದಿಸಿರುವರು
ವಿಭಾಗ: ಲೇಖನಗಳು
Tuesday 11 March, 2008
ಕಂದಮ್ಮ
ಮೊನ್ನೆ ಈ-ಮೈಲ್ ನಲ್ಲಿ ಈ ಚಿತ್ರ ಬಂತು. ತಕ್ಷಣ ನನ್ನ ಕೈಗಳು ಈ ಸಾಲುಗಳನ್ನು ಟೈಪ್ ಮಾಡಿದವು.
ಮುದ್ದಾದ ತುಟಿಗೆ ಮುತ್ತಿಟ್ಟು
ನಿದ್ದೆಯಿಂದ ಎಚ್ಚರಿಸುವೆ
ಬರಿದಾದ ಹಣೆಗೆ ಬೊಟ್ಟಿಟ್ಟು
ಚಂದ್ರನನ್ನು ಎಚ್ಚರಿಸುವೆ!
Posted By ಅಂತರ್ವಾಣಿ at 10:27 pm 4 ಜನ ಸ್ಪಂದಿಸಿರುವರು
Friday 7 March, 2008
ಸಂಧ್ಯಾ - ಬಾಲ್ಯದ ದಿನಗಳು
[ ಮೊದಲ ಬಾರಿಗೆ ಒಂದು ಸಣ್ಣ ಕಥೆ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ. ದಯವಿಟ್ಟು ಓದಿ. ತುಂಬು ಮನದಿಂದ ನಿಮ್ಮ ಸಲಹೆಗಳನ್ನು ಕೊಡಿ. ತುಂಬು ಹೃದಯದಿಂದ ಸ್ವೀಕರಿಸುತ್ತೇನೆ.]
"ಲೇ! ಸಂಧ್ಯಾ, ಇವತ್ತು ಕುಂಟೆ ಬಿಲ್ಲೆ ಆಡೋಣ ಕಣೆ"
"ಸಂಧ್ಯಾ, ನನಗೆ ಹೊಟ್ಟೆ ಹಸಿವು ಕಣೆ. ನಿಮ್ಮ ಮನೇಲಿ ಏನಾದ್ರು ಇದ್ದರೆ ಕೊಡೆ"
"ಅಮ್ಮ. ಹೇಗಿದ್ದೀಯ?"
"ಬಾರೋ ರಂಗ. ನಾನು ಚೆನ್ನಾಗಿದ್ದೀನಿ. ನೀನು ಹೇಗಿದ್ದೀಯ?"
"ಚೆನ್ನಾಗಿದ್ದೀನಿ"
.... ಹೀಗೆ ತಾಯಿ-ಮಗನ ಕ್ಷೇಮ ಸಮಾಚಾರ ನಡೆಯುತ್ತಿರುವ ಮಧ್ಯದಲ್ಲೇ
"ನಾನು ಚೆನ್ನಾಗಿದ್ದೀನಿ ಸಂಧ್ಯಾ"
"ಅಜ್ಜಿ ನೆನ್ನೆ ತಾನೆ ಪರೀಕ್ಷೆಗಳು ಮುಗಿದವು. ಇವತ್ತೆ ನಿನ್ನ ನೋಡಲು ಬಂದೇ ಬಿಟ್ಟೆ"
ಅಷ್ಟು ಹೊತ್ತಿಗೆ ಸೂರ್ಯ, ಪಶ್ಚಿಮದ ದಿಕ್ಕಿನೆಡೆಗೆ ಪ್ರಯಾಣ ಬೆಳೆಸುತ್ತಿದ್ದ. ಗೋಡೆಗೆ ನೇತುಹಾಕಿದ ಗಡಿಯಾರವನ್ನು ನೋಡಿದ ಅಜ್ಜಿ,
ಊಟವಾದ ಬಳಿಕ, ಸಂಧ್ಯಾ ಪಕ್ಕದ ಮನೆ ಹುಡುಗಿ ರಮ್ಯಾಳೊಂದಿಗೆ ಆಡಲು ತೆರಳುತ್ತಾಳೆ.
"ನಾನು ಆರಾಮವಾಗಿದ್ದೀನಿ. ಬಾರೆ ಆಡೋಣ"
"ಸರಿ ಕಣೆ"
ಸಂಧ್ಯಾಳಿಗೆ ಆಟದ ಕಡೆ ಗಮನವೇ ಇರಲಿಲ್ಲ. ಗೆಳತಿಯ ಮನಸ್ಸು ನೋಯಿಸಬಾರದು ಎಂದು, ಅರ್ಧ ಗಂಟೆಯ ಬಳಿಕ,"ಇವತ್ತು ಸಾಕು ಕಣೆ. ನಾಳೆ ಆಡೋಣ" ಅಂತ ಹೇಳಿ ಮನೆಗೆ ಬರುತ್ತಾಳೆ.
"ಏನು ಮಾಡ್ತಾಯಿದ್ದೀಯ"
"ಈಗ ಮಧ್ಯಾಹ್ನಕ್ಕೆ ಅಡುಗೆ ಮಾಡ್ತಾಯಿದ್ದೀನಿ"
"ಅಜ್ಜಿ, ನನಗೂ ಅಡುಗೆ ಮಾಡುವುದು ಹೇಗೆ ಅಂತ ಕಲಿಸು"
"ಇಲ್ಲ ಈಗಲೇ ನಾನು ಅಡುಗೆ ಕಲಿಬೇಕು... " ಎಂದು ಹಠ ಮಾಡುತ್ತಾಳೆ.
"ಅಪ್ಪ ಅಡುಗೆ ಹೇಗೆ ಮಾಡ್ತಾನ್ಯೇ ?"
"ನಾನು ಚೆನ್ನಾಗಿ ಮಾಡ್ತಾರೆ ಅಂತ ನಂಬಿದ್ದೆ. ಆದರೆ, ಆ ಅನು ಇದ್ದಾಳಲ್ಲಾ, ಅವಳು ಹೇಳಿದ್ಲು, ವಾಂತಿ ಬರುತ್ತೆ ಕಣೆ ನಿಮಪ್ಪ ಮಾಡಿದ್ದು ತಿಂದರೆ. ಅಪ್ಪನ ಅಡುಗೆ ತಿಂದು ತಿಂದು ನನ್ನ ನಾಲಗೆ ಕೆಟ್ಟು ಹೋಗಿದೆ. ಇನ್ಮೇಲೆ ಶಾಲೆಗೆ ಹೋಗುವ ಮೊದಲು ಅಡುಗೆ ಮಾಡಿಟ್ಟು ಹೋಗ್ತೀನಿ.ಅದಕ್ಕೆ ನಾನು ಈಗಲೇ ಕಲಿಯಬೇಕು"
"ಪುಟ್ಟಿ ಎಲ್ಲಾ ದಿನ ಅಡುಗೆ ಚೆನ್ನಾಗಿ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಕೆಲವೊಮ್ಮೆ ಕೆಟ್ಟಿರ ಬಹುದು. ನಾನು ಅಡುಗೆ ಕೆಡಸಿದರೆ, ನಿಮ್ ತಾತ ಇದ್ರಲ್ಲಾ...ರೀಗಾಡಿ ಬಿಡೋರು." ಎಂದು ಹೇಳಿ ತನ್ನ ಗತ ದಿನಗಳನ್ನು ನೆನಪಿಸಿಕೊಳ್ಳುತ್ತಾಳೆ.
ಸಂಧ್ಯಾ ಜೋರಾಗಿ ನಗುವಳು.
"ಅಜ್ಜಿ. ಅಮ್ಮ ಮನುಷ್ಯಳು ಅಲ್ವ? ಅವ್ಳು ದೇವರು ಹೇಗೆ ಆಗ್ತಾಳೆ?"
ಅಜ್ಜಿ, ಮನಸ್ಸಲ್ಲೇ ಮಾತಾಡುತ್ತಾಳೆ. "ನಿನಗೊಂದು ಕ್ಷಣ ಕೂಡ ತಾಯಿಯ ಪ್ರೀತಿ ಸಿಕ್ಕಿಲ್ಲ . ಇನ್ನು ಹೇಗೆ ಗೊತ್ತಾಗಬೇಕು ತಾಯಿ ದೇವರಿಗಿಂತ್ಲೂ ಮೇಲು ಅಂತ?"
"ಪುಟ್ಟಿ, ತಾಯಿ ನಮ್ಮನ್ನು ಚಿಕ್ಕ ವಯಸ್ಸಿನಿಂದ ಸಾಕಿರ್ತಾಳೆ. ಪಾಲನೆ, ಪೋಷಣೆ, ವಿದ್ಯಾಭ್ಯಾಸ, ಹೀಗೆ ಹೇಳುತ್ತಾ ಹೋದರೆ, ಕೊನೆಯೇ ಇಲ್ಲ. ಎಲ್ಲಾವುದರ ಜವಾಬ್ದಾರಿ ಹೊತ್ತಿರ್ತಾಳೆ. ದೇವರು ಕೂಡ ನಮ್ಮನ್ನು ಅವಳ ಮಟ್ಟಿಗೆ ನೋಡಿಕೊಳ್ಲೋದಿಲ್ಲ. ಅದಕ್ಕೆ ಹಾಗೆ ನಾಣ್ಣುಡಿ"
ಹೀಗೆ ತಿಂಗಳು ಕಳೆಯಿತು. ತಂದೆಯ ನಿರೀಕ್ಷೆಯಲ್ಲಿ ಸಂಧ್ಯಾ ಇದ್ದಾಳೆ. ಆಗ ಪಕ್ಕದ ಮನೆ ಶಾಂತಮ್ಮ ಬಂದು,
"ರತ್ನಮ್ಮಾನವರೆ, ನಿಮ್ಗೆ ಫೋನ್ ಬಂದಿದೆ ಬನ್ನಿ"
"ಹೋ!! ಅಜ್ಜಿ, ಅದು ಅಪ್ಪಾನೆ ಮಾಡಿರಬೇಕು. ಇನ್ನು ಸ್ವಲ್ಪ ದಿನ ಇಲ್ಲೇ ಇರಲಿ ಅಂತ ಹೇಳ್ತಾರೆ ಅನ್ನಿಸುತ್ತೆ"
"ಇರು, ಹೋಗಿ ನೋಡಿ ಬರ್ತೀನಿ"
ಫೋನಿನಲ್ಲಿ "ಅಮ್ಮ !!!" ಎಂಬ ಧ್ವನಿ ಕೇಳುತ್ತೆ.
"ಯಾರು? ರಂಗಾ ನೆ..?"
"ಇಲ್ಲ ಅಮ್ಮ. ನಾನು ಅವರ ಪಕ್ಕದ ಮೆನೆ.. ಶ್ರೀನಿವಾಸಪ್ಪ"
"ಏನಪ್ಪ ಸಮಾಚಾರ?"
"ಅಮ್ಮ, ಈ ಕೂಡಲೇ ನೀವು ಸಂಧ್ಯಾಳನ್ನು ಕರೆದು ಕೊಂಡು ಇಲ್ಲಿಗೆ ಬನ್ನಿ"
"ಏನು ವಿಷಯ ಅಂತ ಹೇಳು, ರಂಗಾ ಹುಷಾರಾಗಿದ್ದನೆ ತಾನೆ?"
"ನೀವು ಈ ತಕ್ಷಣ ಹೊರಟು ಬನ್ನಿ ಆಮೇಲೆ ನಾನು ಹೇಳ್ತೀನಿ"
"ಸರಿ ಪಾ"
ಅಜ್ಜಿ ಮನೆಗೆ ಬಂದು, "ಪುಟ್ಟಿ, ಬಾ ನಿಮ್ಮನೆಗೆ ಹೋಗೋಣ"
"ಯಾಕೆ ಅಜ್ಜಿ, ಅಪ್ಪ ಬಾ ಅಂತ ಕರೆದರ?"
"ಹು"
"ನಮ್ಮ ಜೊತೆ ನೀನು ಅಲ್ಲೇ ಇದ್ದು ಬಿಡು. ಚೆನ್ನಾಗಿರುತ್ತೆ"
"ಬಾ ಹೋಗೋಣ"
"ಆಮೇಲೆ ನನಗೆ ಇನ್ನು ಹೆಚ್ಚು ಅಡುಗೆ ಹೇಳಿಕೊಡು"
ಅಜ್ಜಿ ಹಾಗು ಸಂಧ್ಯಾ ಇಬ್ಬರು ರಂಗನ ಮನೆಗೆ ಬರುತ್ತಾರೆ. ಅಲ್ಲಿ ಇದ್ದ ಶ್ರೀನಿವಾಸಪ್ಪ, "ಅಮ್ಮ .. ತುಂಬಾ ದುಃಖವಾಗಿದೆ. ರಂಗಾ ಹೋಗಿಬಿಟ್ಟ್ರು..."
ಅಜ್ಜಿಯ ಕಣ್ಣಲ್ಲಿ ಸಣ್ಣದಾಗಿ ಕಂಬನಿ ಹರಿಯಲು ಪ್ರಾರಂಭಿಸುತ್ತೆ.
"ಅಪ್ಪ ಏನು ಇಷ್ಟು ಹೊತ್ತು ಆದರು ಇನ್ನು ಮಲಗೇ ಇದ್ದೀಯ. ಎದ್ದೇಳಪ್ಪಾ....ಎದ್ದೇಳು."
ಅಳುತಿದ್ದ ಅಜ್ಜಿಯನ್ನು ಗಮನಿಸಿ, ಯಾಕಜ್ಜಿ ಅಳುತ್ತಾಯಿದ್ದೀಯ?
"ಕಣ್ಣಿಗೆ ಕಸ ಬಿತ್ತಮ್ಮಾ..."
"ಅಜ್ಜಿ, ಅಪ್ಪಾ ಹೀಗೆ ಮಲಗಿರೋದು ಒಳ್ಳೇದೇ ಆಯ್ತು ಅಲ್ವಾ? ನಾನು ಈಗ ಅಡುಗೆ ಮಾಡಿ ಅಪ್ಪ ಎದ್ದ ತಕ್ಷಣ ಅವರ ಮುಂದೆ ಇಡುತ್ತೇನೆ. ಜಂಭದಿಂದ ನಾನೆ ಮಾಡಿದೆ ಅಂತ ಹೇಳ್ತೀನಿ." ಇಷ್ಟನ್ನು ಹೇಳಿ, ಅಡುಗೆ ಮನೆಗೆ ಹೋಗಿ ಒಲೆ ಹಚ್ಚಿ, ಅಡುಗೆ ಪ್ರಾರಂಭಿಸೇ ಬಿಡುತ್ತಾಳೆ.
ಸ್ವಲ್ಪ ಹೊತ್ತಿಗೆ ಬೇರೆ ಬೇರೆ ಊರುಗಳಿಂದ ಬರಬೇಕಿದ್ದ ಬಂಧು, ಮಿತ್ರರರೆಲ್ಲಾರೂ ಒಬ್ಬಬ್ಬರಾಗಿ ಬರುತ್ತಿದ್ದರು. ಅರ್ಥ ಅಡುಗೆ ಮುಗಿಸಿದ್ದ ಸಂಧ್ಯಾ ಅವರೆಲ್ಲರನ್ನು ನೋಡಿ, "ಅಜ್ಜಿ, ಇವತ್ತು ನಮ್ಮ ಮನೇಲಿ ಹಬ್ಬ. ಎಲ್ಲರೂ ಬರುತ್ತಾಯಿದ್ದರೆ ನನ್ನ ಕೈ ರುಚಿ ನೋಡೋಕೆ. ಇನ್ನು ಸ್ವಲ್ಪ ಹೊತ್ತು ಅಷ್ಟೆ , ಅಡುಗೆ ಆಗೋಗುತ್ತೆ"
ಏನೂ ಅರಿಯದ ಈ ಕಂದನನ್ನು ನೋಡಿ ಪ್ರತಿಯೊಬ್ಬರು ಕಣ್ಣೀರಿಡುತ್ತಿದ್ದರು. ತುಸು ಸಮಯದ ಬಳಿಕ, ಮಾಡಿದ ಅಡುಗೆಯನ್ನು ಒಂದು ತಟ್ಟೆಯಲ್ಲಿ ಹಾಕಿಕೊಂಡು ಬಂದು, "ಅಪ್ಪಾ. ಸಾಕು ನಿದ್ದೆ. ಎದ್ದೇಳು. ನಾನೆ ಅಡುಗೆ ಮಾಡಿದ್ದೀನಿ. ಒಂದು ಸಲ ತಿಂದು ಆಮೇಲೆ ಮಲಗು. ಹೇಗಿದೆ ಅಂತ ಹೇಳು. ನೀನು ಮಾಡುತ್ತಿದ್ದ ಅಡುಗೆಗಿಂತ ರುಚಿ ಇದ್ದೇ ಇರುತೆ." ಎಂದು ಪೂರ್ಣವಾದ ಆತ್ಮವಿಶ್ವಾಸದಿಂದ ಹೇಳುತ್ತಾಳೆ.
"ಯಾಕಜ್ಜಿ, ಅಪ್ಪ ಏಳ್ತಾನೆ ಇಲ್ಲ?"
"ಶಾಶ್ವತವಾದ ನಿದ್ದೆಗೆ ಹೋಗಿದ್ದಾನಮ್ಮ ನಿಮ್ಮಪ್ಪ..."
ನಡೆಯಬೇಕಿದ್ದ ಶಾಸ್ತ್ರಗಳೆಲ್ಲ ನಡೆಯುತ್ತೆ. ತಂದೆಯನ್ನು ನಾಲ್ಕು ಜನ ಹೊತ್ತಿಕೊಂಡು ಹೋಗುವುದನ್ನು ನೋಡಿದ ಸಂಧ್ಯಾಳಿಗೆ ಆಗ ಅರಿವಾಗುತ್ತೆ. ತಂದೆ ಇನ್ನಿಲ್ಲಾ ಅಂತ.
(ಎರಡನೇ ಭಾಗ ಇಲ್ಲಿದೆ)
Posted By ಅಂತರ್ವಾಣಿ at 10:34 pm 8 ಜನ ಸ್ಪಂದಿಸಿರುವರು
ವಿಭಾಗ: ಲೇಖನಗಳು
Thursday 6 March, 2008
ನೆನಪು - ಕನಸು
ನೆನಪು
ಕಳೆದು ಹೋದ ಬಾಲ್ಯವ
ಹಿಂದಿರುಗಿ ಕರೆದರೆ,
ಬರುವುದು ಬರೀ ನೆನಪು
ವ್ಯರ್ಥ ಮಾಡಿದ ಸಮಯವ
ಅಗ್ನಿಗಾಹುತಿಯಾದರೆ,
ಉಳಿಯುವುದು ಬರೀ ನೆನಪು
ಹೊತ್ತಿಗೆಯಲ್ಲೇ ಉಳಿದರೆ,
ಬಾಯಿಗೆ ದೊರೆಯದ ನೀರು
ಹಸಿದಾಗ ಉಣ್ಣದ ಗಂಜಿ
ಪಾತ್ರೆಯಲ್ಲೇ ಹಳಸಿದರೆ,
ಹೊಟ್ಟೆ ತುಂಬುವುದು ಬರೀ ಕನಸು
Posted By ಅಂತರ್ವಾಣಿ at 9:54 pm 5 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು
Monday 3 March, 2008
ಐಟಿ ವಾರ
ನಮ್ಮಂಥ ಐಟಿ (IT) ಜನರ ದೃಷ್ಟಿಯಲ್ಲಿ, ವಾರದ ದಿನಗಳು ಹೇಗಿರುತ್ತವೆ ಅಂದರೇ.....
ಸೋಮಾರಿತನದ ಸೋಮವಾರ
ಮಂಕಾದ ಮಂಗಳವಾರ
ಬುದ್ಧಿಹೀನ ಬುಧವಾರ
ಗುರಿ ತಪ್ಪಿದ ಗುರುವಾರ
ಶುಭದಾಯಕ ಶುಕ್ರವಾರ
ಶಕ್ತಿಯುತ ಶನಿವಾರ
ಭಾಗ್ಯದ ಭಾನುವಾರ
ಸೂಚನೆ: ಕೆಲವು ಪುಣ್ಯಾತ್ಮರು ಪಾಪ ಶನಿವಾರ ಹಾಗು ಭಾನುವಾರ ಕೆಲಸ ಮಾಡುತ್ತಾರೆ. ಅವರ ಪಾಲಿಗೆ ವಾರಾಂತ್ಯವು ಹೇಗಿರುತ್ತೆ ಅಂದರೆ...
ಶನಿ ಕಾಟದ ಶನಿವಾರ
ಭಾಗ್ಯ ಕಾಣದ ಭಾನುವಾರ
ಏನಂತೀರ ನೀವು? ನಾನು ಸರಿ ಅಲ್ವಾ?
Posted By ಅಂತರ್ವಾಣಿ at 9:49 pm 12 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು, ಹಾಸ್ಯವಾಣಿ