Thursday 6 March, 2008

ನೆನಪು - ಕನಸು

ನೆನಪು

ಕಳೆದು ಹೋದ ಬಾಲ್ಯವ
ಹಿಂದಿರುಗಿ ಕರೆದರೆ,
ಬರುವುದು ಬರೀ ನೆನಪು


ವ್ಯರ್ಥ ಮಾಡಿದ ಸಮಯವ
ಮರಳಿ ಬಾ ಎಂದರೆ,
ಸಿಗುವುದು ಬರೀ ನೆನಪು

ಜೊತೆಗೆ ಬೆಳೆದ ಜೀವ
ಅಗ್ನಿಗಾಹುತಿಯಾದರೆ,
ಉಳಿಯುವುದು ಬರೀ ನೆನಪು


ಕನಸು

ಮನದಟ್ಟಾಗದ ಅಕ್ಷರಗಳು
ಹೊತ್ತಿಗೆಯಲ್ಲೇ ಉಳಿದರೆ,
ಜ್ಞಾನಾರ್ಜನೆಯು ಬರೀ ಕನಸು

ಬಾಯಿಗೆ ದೊರೆಯದ ನೀರು
ಬಾವಿಯಲ್ಲೇ ಬತ್ತಿಹೋದರೆ,
ದಾಹ ನೀಗುವುದು ಬರೀ ಕನಸು

ಹಸಿದಾಗ ಉಣ್ಣದ ಗಂಜಿ
ಪಾತ್ರೆಯಲ್ಲೇ ಹಳಸಿದರೆ,
ಹೊಟ್ಟೆ ತುಂಬುವುದು ಬರೀ ಕನಸು

5 ಜನ ಸ್ಪಂದಿಸಿರುವರು:

maddy said...

nija jay,

illina prati vaaniyu.. satyavaagide..

ತೇಜಸ್ವಿನಿ ಹೆಗಡೆ said...

ತುಂಬಾ ಅರ್ಥವತ್ತಾದ ಕವನ.. ಮತ್ತಷ್ಟು ಬರಲಿ.

Sudi said...

super duper :)

ಗುರುರಾಜ said...

accha kannadada swacha kavana.. chenagide.. heege munduvaresi.

Lakshmi Shashidhar Chaitanya said...

ಪ್ರಯತ್ನ ಚೆನ್ನಾಗಿದೆ.