Wednesday 12 March, 2008

ಸಂಧ್ಯಾ - ಅಜ್ಜಿಯ ಮಡಿಲು

ತಂದೆಯ ಅಗಲಿಕೆ ಇಂದ ಅತೀವ ದುಃಖದಲ್ಲಿದ್ದ ಸಂಧ್ಯಾಳನ್ನು ಸಮಾಧಾನ ಮಾಡುವುದಕ್ಕೆ ರತ್ನಮ್ಮಜ್ಜಿ ತುಂಬಾ ಕಷ್ಟ ಪಡುತ್ತಿದ್ದರು. ಆಕೆಯ ಸಹಾಯಕ್ಕೆ ಎಲ್ಲಾ ಸಂಬಂಧಿಕರು ಸೇರಿದರು. ತಬ್ಬಲಿಯಾದ ಸಂಧ್ಯಾಳ ಜವಾಬ್ದಾರಿಯನ್ನು ಅಜ್ಜಿಯೇ ವಹಿಸಿ ಕೊಳ್ಳಬೇಕಾಯಿತು. ಹಾಗೂ ಹೀಗೂ ಸ್ವಲ್ಪ ವಾರಗಳಲ್ಲೇ, ಅಲ್ಪ ಪ್ರಮಾಣದಲ್ಲಿ ಸಮಾಧಾನಗೊಂಡಳು. ತನ್ನ ಗೆಳತಿಯರೊಂದಿಗೆ ಮತ್ತೆ ಆಟವಾಡಲು ಪ್ರಾರಂಭಿಸಿದಳು. ಶಾಲೆ ಪುನರಾರಂಭಗೊಂಡಿತು. ತನ್ನ ಪಾಠವನ್ನು ತಪ್ಪದೆ ಓದುತ್ತಿದ್ದಳು. ಶಾಲೆಯಲ್ಲಿ ಎಲ್ಲರಿಗಿಂತಲೂ ಮುಂದಿದ್ದಳು. ಅವಳ ಬಿಡುವಿನ ವೇಳೆಯಲ್ಲಿ, ಅವಳ ಬಳಿಯಿದ್ದ, ಅಡುಗೆ ಪುಸ್ತಕವನ್ನು ಓದುತ್ತಾಯಿದ್ದಳು. ಅಷ್ಟಲ್ಲದೇ, ಅಡುಗೆ ಮಾಡುವಾ ಹಾಗೇನೂ ಕೈಸನ್ನೆಯಿಂದ ಆಟವಾಡುತ್ತಾಯಿದ್ದಳು. ಪ್ರತಿ ದಿನವು ಸಾರು ಮಾಡುವಾಗ, ಬೇಳೆಯನ್ನು ಬೇಯಿಸುವುದರಿಂದ ಹಿಡಿದು, ತುಪ್ಪದ ಒಗ್ಗರಣೆ ಹಾಕುವರೆಗೂ ಎಲ್ಲಾ ಕೈಸನ್ನೆಯೇ! ಹೀಗೆಯೇ ಕೆಲ ವರ್ಷಗಳು ಸಾಗಿದವು.

ಸಂಧ್ಯಾಳಿಗೆ ಈಗ ಬಾಲ್ಯ ಕಳೆದು, ಯೌವನ! ಹತ್ತನೇ ತರಗತಿಯನ್ನು ಶ್ರಮವಿಲ್ಲದೆ ಉತ್ತಮ ದರ್ಜೆಯಲ್ಲಿ ಉತ್ತೀರ್ಣ! ತದನಂತರ, ಕಾಲೇಜ ಮೆಟ್ಟಿಲೇರುವ ಅವಳ ಆಸೆಯನ್ನು ಅಜ್ಜಿ ಸಮ್ಮತಿಸಿದರು. ಅದೆಷ್ಟು ಬೇಗ ಕಾಲೇಜು ಮುಗಿದೇ ಹೋಯಿತು. ಅವಳ ಪಾಲಿಗೆ ಪ್ರಪಂಚವು ಮೋಟಾರು ವಾಹನದ ಚಕ್ರದಂತೆ ವೇಗವಾಗಿ ತಿರುಗುತ್ತಿತ್ತು. ಈಗ ಅಜ್ಜಿಯ ದೊಡ್ಡ ಜವಾಬ್ದಾರಿಯಂದರೆ, ಅವಳ ಲಗ್ನ. ಅದಕ್ಕಾಗಿ ಎಲ್ಲ ಕಡೆಯಿಂದಾಲು ವರನ ಶೋಧ ನಡೆಸುತ್ತಿದ್ದಳು. ಸಂಧ್ಯಾಳ ಮನಸ್ಸು ಇದಕ್ಕೆ ಒಪ್ಪಿರಲಿಲ್ಲ. ಅಜ್ಜಿಯ ಬಲವಂತಕ್ಕೆ ಮನಸ್ಸನ್ನು ಒಪ್ಪಿಸಿದಳು.

ಒಬ್ಬ ರೂಪವಂತ ತರುಣ, ಮುಂದಿನ ವಾರ ಹೆಣ್ಣು ನೋಡೋದಕ್ಕೆ ಬರುವು ವರ್ತಮಾನ ಅಜ್ಜಿಯ ಕಿವಿಗೆ ಬಡಿಯಿತು. ಅಜ್ಜಿಗೆ ಮಹದಾನಂದವಾಗಿತ್ತು! ಮೊಮ್ಮಗಳನ್ನು ಕರೆದು, ಗಂಡಿನ ಕಡೆಯವರ ಎದುರು ಹೇಗೆ ನಡೆದು ಕೊಳ್ಳಬೇಕು ಎಂಬುದರ ಬಗ್ಗೆ ಪ್ರವಚನವನ್ನೇ ಗೈದಳು. ಸಂಧ್ಯಾ ಎಲ್ಲವನ್ನು ಕೇಳುತ್ತಿದ್ದಳು. ಆ ದಿನ ಬಂದೇ ಬಿಟ್ಟಿತು. ಸಂಧ್ಯಾಳ ಮನಸಲ್ಲಿ ಸ್ವಲ್ಪ ಭಯ, ಹೆಚ್ಚಿನ ನಾಚಿಕೆ ಎಲ್ಲಾ ಎದ್ದು ಕಾಣುತ್ತಿತ್ತು. ಅಜ್ಜಿ ಬಂದವರನ್ನು ವಿನಯದಿಂದ, ಆದರದಿಂದ, ಸ್ವಾಗತಿಸಿದರು. ಕುಡಿಯಲು ನೀರನ್ನು ತಂದರು. ಎಲ್ಲರ ಯೋಗಕ್ಷೇಮ ವಿಚಾರಿಸಿದರು. ಸ್ವಲ್ಪ ಹೊತ್ತಿನಲ್ಲೇ ಸಂಧ್ಯಾಳು ಉಪ್ಪಿಟ್ಟು , ಕೇಸರಿಭಾತಿನ ತಟ್ಟೆಯನ್ನು ತಂದು ಹುಡುಗನ ತಂದೆ, ತಾಯಿ ,ನೆಂಟರಿಷ್ಟರಿಗೆಲ್ಲಾ ಕೊಟ್ಟು, ಅವನ ಕಡೆ ಸಾಗಿದಳು. ಆಗ ಅವಳಿಗೆ ನಾಚಿಕೆ ಹೆಚ್ಚಾಯಿತು. ಆ ನಾಚಿಕೆಯಿಂದಲೇ ಓರೆಗಣ್ಣಿನಿಂದ ಆತನನ್ನು ನೋಡಿ, ಒಂದು ಕಿರು ನಗೆ ಬೀರಿದಳು. ಅವನಿಗೂ ಸಹ ನಾಚಿಕೆ ಎದ್ದು ಕಾಣುತ್ತಿತ್ತು. ಆತನೂ ಸಹ ಸಂಧ್ಯಾಳನ್ನು ನೋಡಿದ. ಬಿಸಿಯಾಗಿದ್ದ ಕೇಸರಭಾತನ್ನು ಬಾಯೊಳಗೆ ಹಾಕಿಕೊಂಡು, ಅದರ ಬಿಸಿ ತಾಗಿದಾಗ , ಹಾ! ಎನ್ನಲು, ಸಂಧ್ಯಾಳು, "ಕೇಸರಿಭಾತು ಬಿಸಿ ಇದೆ, ಸ್ವಲ್ಪ ಆರಿದ ಮೇಲೆ ತಿನ್ನಿ", ಎಂದು ನಾಚ್ಚುತ್ತಲೇ ನುಡಿದಳು. ಹುಡುಗ ನಕ್ಕನು. ಆಮೇಲೆ ಕಾಫಿಯೂ ಮುಗಿಯಿತು. ಹಿರಿಯರೆಲ್ಲಾ ಮುಂದಿನ ಮಾತು-ಕಥೆ ಆಡಿದರು. ಕೊಡುವುದು-ತೆಗೆದುಕೊಳ್ಳುವುದರ ಬಗ್ಗೆ ಚರ್ಚೆ ನಡೆಸಿದರು. ಹುಡುಗನ ತಂದೆಯು "ವರದಕ್ಷಿಣೆ ಎಷ್ಟು ಕೊಡ್ತೀರಿ?" ಎಂದರು. ಆಗ ಅಜ್ಜಿಯು, ನಮ್ಮ ಬಳಿ ಹೆಚ್ಚಿಗೆ ಕೊಡುವ ಶಕ್ತಿಯಿಲ್ಲ. ನಮ್ಮ ಶಕ್ತ್ಯಾನುಸಾರ ಮದುವೆ ಮಾಡಿ ಕೊಡ್ತೀವಿ ಅಂದಳು. ಆಗ ಅವರೆಲ್ಲರೂ ತುಂಬಾ ಅಸಡ್ಡೆಯಿಂದ ಮಾತಾಡಿದರು. ಸಂಧ್ಯಾಳು ಈ ಗಂಡು ಬೇಡ ಎಂದು ನಿರ್ಧರಿಸಿದಳು .ಎಲ್ಲರೂ ಹೋದ ಬಳಿಕ, ಅಜ್ಜಿ, ಈ ಗಂಡು ಬೇಡ ಎಂದು ಹೇಳೇ ಬಿಟ್ಟಳು. ಆಗ ಅಜ್ಜಿ,"ನಾನ್ ಸಾಯೋದರೊಳಗೆ ನಿನ್ನ ಮದುವೆ ಮಾಡ್ಬೇಕು ಅಂದುಕೊಂಡಿದೀನಿ. ನೋಡೋಣ ಏನಾಗುತ್ತೆ ಅಂತ"

ಸಂಧ್ಯಾ ಮತ್ತೆ ವಿದ್ಯಾಭ್ಯಾಸ ಮುಂದುವರಿಸುತ್ತಾಳೆ. ಪದವಿಧರೆ ಆದ ನಂತರ, ಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಳ್ಳುತ್ತಾಳೆ. ಈಗ ಅವಳು ಮನೆಯ ನಿಭಾಯಿಸುವ ಹೊಣೆಯನ್ನು ಹೊರುತ್ತಾಳೆ. ಸಂಜೆಯ ಸಮಯದಲ್ಲಿ, ಬಡವರ ಮನೆ ಮಕ್ಕಳಿಗೆ ಪಾಠ ಹೇಳಿ ಕೊಡುವ ಮೂಲಕ ಕಾಲ ಕಳೆಯುತ್ತಾಳೆ. ಈ ನಡುವೆ, ಅಜ್ಜಿಯು ತನ್ನ ಕೊನೆ ಉಸಿರನ್ನು ಎಳೆಯುತ್ತಾಳೆ. ಅಂತ್ಯ ಸಂಸ್ಕಾರವಾದ ಮೇಲೆ, ಸಂಧ್ಯಾಳಿಗೆ ಏನು ಮಾಡುವುದು ಎಂಬ ಚಿಂತೆ ಹೆಚ್ಚಾಗುತ್ತೆ. ಇವಳ ಸಹಾಯಕ್ಕೆ ಸಂಬಂಧಿಕರು ಅನ್ನಿಸಿಕೊಂಡಿದ್ದವರೆಲ್ಲಾ ಬಾರದೇಯೇಯಿದ್ದದ್ದನ್ನು ಕಂಡು, ಅವಳ ಜೀವನ ಅವಳಿಚ್ಛೆಯಂತೆ ನಡೆಸ ಬೇಕೆಂಬ ನಿರ್ಣಯಕ್ಕೆ ಬರುತ್ತಾಳೆ.

(ಮುಂದುವರಿಯುವುದು...)

4 ಜನ ಸ್ಪಂದಿಸಿರುವರು:

maddy said...

olle track nallide..
munduvaresi...

Sushrutha Dodderi said...

ಪ್ರಿಯ ಜಯಶಂಕರ್,
ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

Lakshmi Shashidhar Chaitanya said...

ಕಥೆ ಮುಂದುವರಿಸಿದ್ದು ಕುತುಹಲವನ್ನು ಮತ್ತಷ್ಟು ಹೆಚ್ಚಿಸಿದೆ.ರೋಚಕ ತಿರುವುಗಳು ಪದೆದುಕೊಳ್ಳುತ್ತವೆ ಎಂದು ಅನಿಸುತ್ತಿದೆ. ಸೂಪರ್ !

ತೇಜಸ್ವಿನಿ ಹೆಗಡೆ said...

ಅಂತೂ ಕಥಾಲೋಕಕ್ಕೆ ಪಾದಾರ್ಪಣೆಗೈದಿರುವಿರಿ.. ಶುಭವಾಗಲಿ. ಅಜ್ಜಿಯ ಮಡಿಲಿನಿಂದ ಸುರಕ್ಷಿತ ಜೀವನದೆಡೆ ಸಂಧ್ಯಾಳ ಬಾಳ ಪಯಣ ಸಾಗುವಂತಾಗಲಿ.