Monday 19 May, 2008

ನೂರೊಂದು ನೆನಪು... ಇನ್ಮುಂದೆ ನೆನಪು

ಕನ್ನಡ ಚಿತ್ರ ರಂಗದ ಉತ್ತಮ ಸಾಹಿತಿ, ನಿರ್ದೇಶಕ ಆರ್.ಎನ್.ಜಯಗೋಪಾಲ್ ಅವರು ಇಂದು ನಿಧನರಾರದು. ಅವರಿಗೆ ಶ್ರದ್ಧಾಂಜಲಿ.

ಮರೆಯದ ನೆನಪನು ಎದೆಯಲ್ಲಿ ತಂದು,
ನೂರೊಂದು ನೆನಪನ್ನು ಎದೆಯಾಳದಿಂದ ಹಾಡಿ,
ನೀ ಮೀಟಿದ ನೆನಪೆಲ್ಲವು ಎದೆತುಂಬಿ ಹಾಡಾಗಿಸಿದವರು......
ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ಕೊಟ್ಟವರು....
ನೀರಿನಲ್ಲಿ ಅಲೆಯ ಉಂಗುರ ಎಬ್ಬಿಸಿದವರು...
ಅಪಾರ ಕೀರ್ತಿ ಗಳಿಸಿದವರು....
ರವಿವರ್ಮನ ಕುಂಚದಿಂದ, ಒಲವಿನ ಬಣ್ಣದಿಂದ ಆಟಾಡಿದವರು...
ಕನ್ನಡ ನಾಡಿನ ಜೀವನದಿ ಕಾವೇರಮ್ಮನ ಬಗ್ಗೆ ಹೊಗಳಿದವರು...

ಇನ್ನು ಬರೀತಾ ಹೋದರೆ.. ಕೊನೆಯಿಲ್ಲ..... ಇವರ ಗೀತೆಗಳು ನಮ್ಮ ಕಿವಿ, ಮನಸ್ಸಿಗೆ ಮುದ ನೀಡಿವೆ. ನೀಡುತ್ತಾಯಿವೆ. ಇಂದು ಕೆಲಸದ ಬಿಡುವಿನಲ್ಲಿ ಅಂತರ್ಜಾಲದಲ್ಲಿ R N J ನಿಧನ ವಾರ್ತೆ ತಿಳಿದ ತಕ್ಷಣ ಸ್ವಲ್ಪ ಬೇಜಾರಾಯ್ತು.

ಸಾಹಿತಿ, ನಿರ್ದೇಶಕನ ಅಲ್ಲದೆ, ಅವರು Sound Engineer ಪದವೀದರ, ನಟ, ಸಂಗೀತ ನಿರ್ದೇಶಕ, ಪಿಟೀಲು ವಾದಕ.

ಪ್ರತಿ ಭಾನುವಾರ ಈ ಟಿ.ವಿ. ಕನ್ನಡದಲ್ಲಿ ಅವರ ಕಾರ್ಯಕ್ರಮ "ಬಾಳೊಂದು ಭಾವಗೀತೆ" ಯ ಅಭಿಮಾನಿಯಾಗಿದ್ದೆ. ನಿನ್ನೆ ದಿನ ಅದನ್ನು ನೋಡಿ, ಇವತ್ತು ಅವರ ನಿಧನ ವಾರ್ತೆ ಕೇಳಿದರೆ ಮನಸಿಗೆ ದುಃಖ ಆಗುವುದು ಸರಿ.

ಇಂದು ಸಾಯಂಕಾಲ, ವಿವಿಧಭಾರತಿ ಹಾಗು ಕಾಮನಬಿಲ್ಲಿನಲ್ಲಿ RNJ ಅವರ ಹಾಡುಗಳನ್ನು ಕೇಳಿ, ದುಃಖದ ಸಂತೋಷ!

ಅಂತರ್ವಾಣಿಗೆ ಜಯಗೋಪಾಲ್ ಒಬ್ಬ ವಿಶೇಷ ವ್ಯಕ್ತಿ. ಜಯಗೋಪಾಲ್ ಅವರನ್ನು ಹತ್ತಿರದಿಂದ ನೋಡುವ ಸೌಭಾಗ್ಯ ಒಮ್ಮೆ ನನಗೆ ಒದಗಿತ್ತು. ಕೆಲವು ಕ್ಷಣಗಳನ್ನು ಅವರೊಂದಿಗೆ ಕಳೆದಿದ್ದೆ. ಅವರ ಸ್ಫೂರ್ತಿಯಿಂದ ನಾನು ಬರೆದ ಕವನಗಳು ಇವೆ.

ಅವರೇ ಹೇಳಿದ ಹಾಗೆ, "ನನ್ನ ಕಥೆಗೆ ಅಂತ್ಯ ಬರೆದು, ಕವಿಯು ಹರಸಿದ ನನ್ನನು". ಎಲ್ಲರ ಬಾಳಲ್ಲೂ ಅಂತ್ಯ ಇದ್ದೇ ಇರುತ್ತದೆ.

--ಇದು ದುಃಖದ ವಾಣಿ

[ಬಾನುಲಿ.ಕಾಂ ನಲ್ಲಿ ಪ್ರಕಟಿಸಿದ್ದಾರೆ]

2 ಜನ ಸ್ಪಂದಿಸಿರುವರು:

maddy said...

khandita nija.. RNJ avara agalike chitra sahityake tumbalaarada nashta...

avara avara geethegalante ajaraamara..

Madhu

Lakshmi Shashidhar Chaitanya said...

:( :(

sakhath atte naanu avattu....bhagavaMta avara aatmakke shaanti kodli !