Friday 2 October, 2009

ನಿನಗಾಗಿ...

ನಿನ್ನ ಮರೆತಿಹ ಚಣಗಳೆಲ್ಲಿದೆ
ನಿನ್ನ ನೆನೆಯದ ದಿನಗಳೆಲ್ಲಿದೆ
ನೀನು ನನ್ನೊಳಗಿರುವ ಸತ್ಯವ ನಾನು ಮರೆತಿಲ್ಲ
ನನ್ನ ಮೊಗದಲಿ ನಗುವ ತರಿಸುವೆ
ನನ್ನ ನಯನದಿ ಬಿಂದು ಸುರಿಸುವೆ
ನನ್ನ ಕಂಬನಿ ಒರೆಸುವ ನಿನ್ನ ಹೇಗೆ ಮರೆಯಲಿ ನಾ

[ಇದನ್ನು ಯಾರ ಕುರಿತಾಗಿ ಬರೆದಿದ್ದೇನೆಂದು ಬಿಡಿಸಿ ಹೇಳ ಬೇಕಿಲ್ಲ ಅನಿಸುತ್ತೆ. ಮತ್ತೊಂದು ಭಾಮಿನೀ ಷಟ್ಪದಿಯ ಪ್ರಯತ್ನ]

10 ಜನ ಸ್ಪಂದಿಸಿರುವರು:

shivu.k said...

ಜಯಶಂಕರ್,

ಭಾಮಿನಿ ಷಟ್ಪದಿಯಲ್ಲಿ ಬರೆದ ಕವನ ತುಂಬಾ ಚೆನ್ನಾಗಿದೆ. ನಿಮಗೆ ಷಟ್ಪದಿ ಒಲಿಯುವಂತೆ ಕಾಣುತ್ತಿದೆ ಮುಂದುವರಿಸಿ..

ತೇಜಸ್ವಿನಿ ಹೆಗಡೆ said...

ಚುಟುಕಾಗಿದ್ದರೂ ಬಲು ಸೊಗಸಾಗಿದೆ ನಿಮ್ಮ ಷಟ್ಪದಿ. ಹಾಂ.. ಗೊತ್ತಾಯಿತು ಯಾರ ಕುರಿತು ಬರೆದದ್ದು ಎಂದು.... ಆ ದೇವರು ಇನ್ನಷ್ಟು ಇಂತಹ ಷಟ್ಪದಿಯನ್ನು ರಚಿಸುವ ಸಾಮರ್ಥ್ಯ ಕೊಡಲೆಂದು ಹಾರೈಸುವೆ.

PARAANJAPE K.N. said...

ಭಾಮಿನಿ ಷಟ್ಪದಿ ಚೆನ್ನಾಗಿದೆ,.

sunaath said...

ಸುಂದರ ಭಾಮಿನಿ!

ಅಂತರ್ವಾಣಿ said...

ಎಲ್ಲರಿಗೂ ವಂದನೆಗಳು.
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ

ಗೌತಮ್ ಹೆಗಡೆ said...

chennagide ri:)

Dileep Hegde said...

ಜಯ ಶಂಕರ್ ಸರ್...
ಉತ್ತಮ ಪ್ರಯತ್ನ.. ಕವನ ಇಷ್ಟವಾಯ್ತು...
ಭಾಮಿನೀ ಷಟ್ಪದಿ ಯ ಕವನಗಳಲ್ಲಿ ಆದಿ ಪ್ರಾಸ ಇರ್ಬೇಕಂತ ನಿಯಮ... ಇಲ್ಲಿ ಅಂತ್ಯ ಪ್ರಾಸವೂ ಬಂದಿದೆ...
ಪ್ರಯತ್ನ ಮುಂದುವರೆಸಿ...

ಅಂತರ್ವಾಣಿ said...

ಗೌತಮ್ ಹಾಗು ದಿಲೀಪ್ ಅವರೆ
ವಂದನೆಗಳು

bisi bisi suddi said...

ಕವನ ತುಂಬಾ ಚೆನ್ನಾಗಿದೆ.....i like it.

maddy said...

very nice lines...