Wednesday 12 March, 2008

ಸಂಧ್ಯಾ - ಸುಖ ಜೀವನ

ಅಜ್ಜಿಯ ನೆನಪಿನಿಂದ ಆಚೆ ಸಂಧ್ಯಾ ಬಂದಿರೋದಿಲ್ಲ. ಅಡುಗೆಯ ಪುಸ್ತಕವನ್ನು ಓದುತ್ತಾ, ತನ್ನ ಬಾಲ್ಯವನ್ನೂ ಹಾಗು ಅಜ್ಜಿಯನ್ನು ನೆನೆಸಿಕೊಳ್ಳುತ್ತಾಳೆ. ತನ್ನ ಮುಂದಿನ ಜೀವನ ಹೇಗೆ ಸಾಗಿಸಬೇಕು ಎಂಬ ಯೋಚನೆಯನ್ನು ಅಹೋರಾತ್ರಿ ನಡೆಸುತ್ತಾಳೆ. ತನ್ನ ಒಂಟಿ ಜೀವನಕ್ಕೆ ಇನ್ನೊಬ್ಬರು ಬೇಕೆಂದು ತೀರ್ಮಾನ ಮಾಡುತ್ತಾಳೆ. ತನ್ನ ಶಾಲೆ ಸಮಯ ಕಳೆದ ನಂತರ, ಅವಳ ಬಳಿ ಇದ್ದ ಅಡುಗೆಯ ಬಗ್ಗೆಗಿನ ಮಾಹಿತಿಯನ್ನು ಒಂದು ಪುಸ್ತಕವನ್ನಾಗಿಸಿ ಪ್ರಕಟಿಸ ಬೇಕು ಎಂಬುದಾಗಿ ತೀರ್ಮಾನ ಕೈಗೊಳ್ಳುತ್ತಾಳೆ. ಇದಕ್ಕಾಗಿ ಆರಂಭದಲ್ಲಿ ತುಂಬಾ ಶ್ರಮ ಪಡುತ್ತಾಳೆ. ಪುಸ್ತಕ ಬಿಡುಗಡೆಯ ದಿನ ಬರುವುದೆಂದು ೫-೬ ತಿಂಗಳಿನಿಂದ ಕಾಯುತ್ತಾಯಿರುತ್ತಾಳೆ. ಪುಸ್ತಕಕ್ಕೆ ಬಿಡುಗಡೆ ಆಗುವ ಯೋಗವೇ ಇಲ್ಲ ಎಂದು ಮನಸ್ಸಿನ ಒಂದು ಮೂಲೆ ಕೂಗಿ ಹೇಳುತ್ತದೆ. ಆದರೂ ಅವಳಲ್ಲಿ ಆತ್ಮ ವಿಶ್ವಾಸ ಇರುತ್ತದೆ. ಪುಸ್ತಕ ಬಿಡುಗಡೆ ಮಾಡೇ ತೀರುತ್ತೇನೆ ಅಂತ.

ಒಂದು ದಿನ ಅದು ನನಸಾಗುವ ಕಾಲ ಬರುತ್ತೆ. ಇವಳ ಅಡುಗೆಯ ಪುಸ್ತಕ ಆ ಊರಲ್ಲಿ ಪ್ರಖ್ಯಾತಗೋಳ್ಳುತ್ತದೆ. ಹಾಗೆ ಅದು ಪಕ್ಕದ ಊರಿಗೂ ಹಬ್ಬುತ್ತದೆ. ನಂತರ ಅನೇಕ ಊರುಗಳಲ್ಲಿ ಇವಳ ಪುಸ್ತಕಕ್ಕೆ ಬೇಡಿಕೆ ಬರುತ್ತದೆ. ಹೀಗೆ ಅವಳ ಪುಸ್ತಕಗಳು ಮಾರಾಟವಾದಂತೆ, ಅವಳಿಗೂ ಆದಾಯ ಹೆಚ್ಚುತ್ತದೆ. ಅಡುಗೆ ಬಾರದ ಹೆಂಗಳೆಯರು ಇದನ್ನು ಕೊಳ್ಳಲು ಕಾತುರರಾಗಿರ್ತಾರೆ. ಅಡುಗೆಯ ಅನಿವಾರ್ಯವಿರುವ ಚಿಗುರು ಮೀಸೆಯ ಹುಡುಗರೂ ಸಹ ಇದನ್ನು ಕೊಂಡು, "ಅನ್ನಪೂರ್ಣೇಶ್ವರಿ ಸಂಧ್ಯಾ" ಎಂಬ ಬಿರುದನ್ನು ದಯಪಾಲಿಸಿರುತ್ತಾರೆ. ಒಂದೆರಡು ವರ್ಷ ಕಳೆಯುತ್ತಲೇ, ಇವಳು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗುವಂಥಹ ಪುಸ್ತಕಗಳನ್ನು ಹೊರ ತರುತ್ತಾಳೆ. ಅವಳು ಇದ್ದ ಶಾಲೆಯಲ್ಲದೇ ಬೇರೆ ಶಾಲೆಯ ಮಕ್ಕಳೂ ಅದನ್ನು ಖರೀದಿಸುತ್ತಾರೆ. ಇವಳ ಆದಾಯ ವೃದ್ಧಿಯಾಗುತ್ತದೆ.

ತನ್ನ ೨೫ನೆ ವಯಸ್ಸಿಗೆ ಉತ್ತಮ ವರ ಸಿಕ್ಕರೆ ಮದುವೆ ಇಲ್ಲದಿದ್ದರೆ ಹೀಗೆ ಸಾಹಿತ್ಯ ಸೇವೆ! ಎಂಬುದಾಗಿ ತೀರ್ಮಾನಿಸಿ, ಗಂಡನ್ನು ಹುಡುಕಿ ಕೊಳ್ಳುವ ಕೆಲಸ ತಾನೆ ನೋಡಿ ಕೊಳ್ಳುತ್ತಾಳೆ. ಆಗ, ಈ ವಿಷಯ ತಿಳಿದ ಕಾಲೇಜು ಉಪನ್ಯಾಸಕನೊಬ್ಬ ಇವಳ ಬಳಿ ಮದುವೆಯ ವಿಚಾರ ಪ್ರಸ್ತಾಪಿಸುತ್ತಾನೆ. ನಿರ್ಧಾರ ತಿಳಿಸಲು ಸ್ವಲ್ಪ ಸಮಯ ಕೊಡುವಂತೆ ಕೇಳುತ್ತಾಳೆ. ಸಂಧ್ಯಾಳಿಗೆ ಅವನ ಪರಿಚಯವಿರುತ್ತದೆ. ಅವನ ಸ್ವಭಾವನ್ನು ಅವಳು ಬಹು ಹಿಂದಿನಿಂದಲೂ ಮೆಚ್ಚಿರುತ್ತಾಳೆ. ಈತನನ್ನು ವರಿಸಲು ನಿರ್ಧರಿಸಿ, ಅವನ ಬಳಿ ಸಂತಸದಿಂದ ಹೇಳುತ್ತಾಳೆ. ಆಗ ಶ್ರೀಧರನು, ಅವರ ಹೆತ್ತವರಿಗೆ ಈ ವಿಷಯ ತಿಳಿಸುತ್ತಾನೆ. ಹುಡುಗಿಯು ಬೇರೆ ಜಾತಿಯವಳಾದ್ದರಿಂದ ಸ್ವಲ್ಪ ಮಟ್ಟಿಗೆ ಜೋರು ಜಗಳವೇ ನಡೆಯುತ್ತದೆ. ಶ್ರೀಧರನು ಅವಳ ಜೀವನದ ಘಟನೆಗಳನ್ನೆಲ್ಲಾ ಹೇಳಿದ ಮೇಲೆ, ಇವರಿಗೆ ಅವರು ಈವರೆವಿಗೂ ಆಡಿದ ಮಾತುಗಳು ತಪ್ಪೆಂದು ಅರಿವಾಗುತ್ತದೆ. ಲಲಿತಮ್ಮ ಉಪಯೋಗಿಸುತ್ತಿದ್ದ ಅಡುಗೆಯ ಪುಸ್ತಕದ ಲೇಖಕಿಯೇ ಸೋಸೆಯಾಗುವಾಗ ಪುಸ್ತಕವಿನ್ನೇಕೆ ಎಂದು ಅದನ್ನು ಕೈಗೆ ಸಿಗದಹಾಗೆ ಇಡುತ್ತಾಳೆ. ಈರ್ವರಿಗೂ ಹೆಮ್ಮೆಯಾಗುತ್ತದೆ.

ಸಂಧ್ಯಾ ಮದುವೆಯಾಗಿ, ಕೆಲಸವನ್ನೂ, ಸಾಹಿತ್ಯ ಸೇವೆಯನ್ನು ನಡೆಸುತ್ತಾಳೆ. ತನಗ ಬರುವ ಆದಾಯದ ಕೆಲ ಭಾಗವನ್ನು ಬಡವರಿಗೆ ದೇಣಿಗೆಯಾಗಿ ನೀಡುತ್ತಾ ಇರುತ್ತಾಳೆ.ತುಂಬಾ ಸಂತೋಷದಿಂದ, ತೃಪ್ತಿಯಿಂದ, ಜೀವನ ಸಾಗಿಸುತ್ತಾಳೆ.

(ಮುಗಿಯಿತು)

2 ಜನ ಸ್ಪಂದಿಸಿರುವರು:

bhadra said...

kathe cennaagi niroopisiddeeri, jayashankar

modalaneya bhaaga Odida naMtara muMdEnu aMta kutoohala mooDisuvaMtide. oMdE usirige bareyadiruvudu, aasaktiyannu keraLisivaMtide

innoo heccu heccu saNNa kathegaLannu neeDuttiri

oLLeyadaagali

gurudEva dayaa karo deena jane

Harisha - ಹರೀಶ said...

ಮೊದಲೆರಡು ಭಾಗಗಳು ಚೆನ್ನಾಗಿವೆ.. ಮೂರನೆಯದು ಸ್ವಲ್ಪ ನೀರಸ ಅಂತ ಅನಿಸಿತು. ಒಟ್ಟಾರೆ ಹೇಳುವದಾದರೆ ಕಥೆ ಚೆನ್ನಾಗಿದೆ.. ಮೊದಲ ಪ್ರಯತ್ನ ವಿಜಯ ಗಳಿಸಿದೆ :-)