Showing posts with label ಅಗ್ರಜಾನುಭವ. Show all posts
Showing posts with label ಅಗ್ರಜಾನುಭವ. Show all posts

Saturday, 31 March 2012

ಪಂಜರದಿಂದ ಪ್ರಪಂಚಕ್ಕೆ!

ಕುಳಿತಿದ್ದೆವು ನಾವು, ತಿಳಿಯದೆ ಅನ್ಯ ಪ್ರಪಂಚ
ಸಾಕಿದ್ದರು ನಮ್ಮ, ತೋರದೆ ಕರುಣೆ ಕೊಂಚ

ಕೋಮಲವಾದ ಕರಗಳಲ್ಲಿ ಸೇರಿದಾಗಲೂ ನಾವು
ತಿಳಿದಿದ್ದೆವೂ ಇನ್ನು ಮುಂದೂ ನಮಗೆ ಬೇವು

ಸಹೃದಯದ ಪೋರಿಗೆ ತಿಳಿಯಿತಾದರೂ ಹೇಗೆ
ಈ ಪ್ರಣಯ ಹಕ್ಕಿಗಳ ಪ್ರತಿದಿನದ ಬೇಗೆ?

ಉಡುಗೊರೆಯಾಗಿ ಕೊಡುತ್ತಾ ನಮ್ಮನ್ನು,
ಬಿಡುಗಡೆ ಮಾಡಿಸಿದಳು... ಪಂಜರದಿಂದ ಪ್ರಪಂಚಕ್ಕೆ!

Tuesday, 7 February 2012

ವ(ಹ)ರ್ಷ ಕವನ

೨೦೧೨ರ ಹೊಸ ವರ್ಷವನ್ನು ನಾನು ಪುಟಾಣಿಗಳ (ದೀಪು, ರಶ್ಮಿ, ರಾಧಿಕ, ರಂಜಿತಾ, ಸಂಧ್ಯಾ) ಜೊತೆ ಆಚರಿಸಿದೆ. ಈ ಕುರಿತಾಗಿ ಬರೆದ ಕವನ.

ನೆನ್ನೆ  ಇತ್ತು ಆಚರಣೆ
ಬೆಳಗಿನವರೆಗೂ ಜಾಗರಣೆ !

ಸೇರಿದೆವು ಸಂಜೆ ಕೊಳದ ಬಳಿ
ಜೊತೆಯಾಯಿತು ತಂಗಾಳಿ
ಆಡಿದೆವಲ್ಲಿ ಹಲವಾರು ಆಟ
ಯಾರು ಕಳಿಸಿಕೊಟ್ಟರೋ ಸಮಯಕ್ಕೆ ಓಟ !

ಗಡಿಯಾರದ ಮುಳ್ಳಿಗೋ
ಗುರಿ ಮುಟ್ಟುವ ಕಾತರ
ಅಡುಗೆ ಮನೆಯ ಊಟವ
ಬಯಸಲಿಲ್ಲ ನಮ್ಮುದರ!

ಮಾತಿನರಮನೆಯೇ ನೆಲೆಸಿತ್ತಲ್ಲಿ
ಮೌನ ಮಂಕಾಯಿತು
ಭಾವನೆಗಳು ತುಂಬಿತ್ತಲ್ಲಿ
ಗಾನ ಲಾಸ್ಯ ಮೂಡಿತು

ಕೊರೆವ ಆ ಚಳಿಯಲ್ಲೂ  
ನಮಗೊಂದೇ ಆಸೆ, ಐಸ್ ಕ್ರೀಮು ತಿನ್ನಬೇಕೆಂದು
ನೆನೆಪಿಸಿ ಕೊಂಡರೆ ಈಗಲೂ
ನಮಗೊಂದೇ ಆಸೆ, ಹೊಸ ವರ್ಷ ಬರಬೇಕೆಂದು

ನೆನ್ನೆ  ಇತ್ತು ಆಚರಣೆ
ಹೊಸ ವರ್ಷಕೆ ಜಾಗರಣೆ!

Tuesday, 13 October 2009

ದುಡ್ಡಿನ ಗಿಡ

ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು

ಚಿಕ್ಕ ವಯಸ್ನಲ್ ಅಮ್ಮ ಹೇಳಿದ್ನ
ಹಾಸ್ಯ ಅಂತ ತಿಳ್ಕೊಂಡಿದ್ದೆ
ದುಡ್ಡೂ ಕೂಡ ಹಾಳೆಯಂತೆ! ಬೆಲ್ಲೆಯಂತೆ!
ಹೇಗೆ ಬೆಳೆಸೋದ್ ಅಂದ್ಕೊಂಡಿದ್ದೆ

ವಸುಂಧರೆ ತಾಯಿ ನೀನು
ಬೀಜ ಹಾಕಿದ್ರೆ ಮರ ಮಾಡ್ತಿ
ನಾಣ್ಯವೊಂದ ಬಿತ್ತುತ್ತೀನಿ
ದುಡ್ಡಿನ ಗಿಡ ಮಾಡ್ತೀಯಾ?

ಜೀವಕ್ ಬೇಕಾದ್ ಅನ್ನ, ನೀರು
ಎಲ್ಲಾ ನೀನೆ ಕೊಡ್ತೀಯಾ
ಜೀವನ ಸಾಗಿಸೋಕ್ ಬೇಕೀ ದುಡ್ಡು
ಇನ್ನೂ ಯಾಕೆ ಕೊಟ್ಟಿಲ್ಲ?

ನಾಣ್ಯಕ್ ಜೀವ ಕೊಟ್ಟು ನೋಡು
ಬಿತ್ತಿ ಪ್ರಯತ್ನ ಮಾಡ್ತೀನಿ!
ದುಡ್ಡಿನ ಗಿಡ ಬಂದ್ರೆ ಸಾಕು
ಬಡವರ ಸಮಸ್ಯೆ ಪರಿಹರಿಸ್ತೀನಿ.

ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು.

Friday, 26 June 2009

ಅಗ್ರಜಾನುಭವ - ೩

ಜ್ಞಾನದ ಶಾಯಿ ಲೇಖನಿಯೊಳಿರಲು
ಹೊಮ್ಮುವುದು ಲೇಖನವು
ಜ್ಞಾನದ ಶಾಯಿ ಬರಿದಾದ ಮೇಲೆ
ಹೊಮ್ಮದು ಒಂದಕ್ಷರವೂ - ಅಗ್ರಜ

Saturday, 10 January 2009

ನಿರೀಕ್ಷೆಗಳೇ ಬೇಸರದ ಮೂಲ

ವಿಧ ವಿಧವಾದ ನಿರೀಕ್ಷೆಗಳೇತಕೆ?
ವಿಧಾತನು ಅದನ್ನು ವಿರೋಧಿಸಬಲ್ಲ
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ

ಪರಿ ಪರಿಯ ನಿರೀಕ್ಷೆಗಳೇಕೆ ಮನದಲ್ಲಿ?
ಹರಿಯು ಅದನ್ನು ಹುಸಿಯಾಗಿಸಬಲ್ಲ
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ

ನಿರೀಕ್ಷೆಗಳಿಗಿಡು ಪೂರ್ಣವಿರಾಮ
ಈಡೇರದಿರೆ ಅವು, ಚಿತ್ತ ನಿರ್ನಾಮ!
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ

Saturday, 26 April 2008

ಅಗ್ರಜಾನುಭವ



ಕಸಗುಡಿಸುವನೆಂದು ಕಸದಂತೆ ಕಾಣಬೇಡ;
ಅವನಲ್ಲಿಯು ಇರುವನು ಕೈಲಾಸ ವಾಸಿಯು !
ಎಲ್ಲರಿಗು ಗೌರವ ನೀಡು -ಅಗ್ರಜ
____

ದುರದೃಷ್ಟವೆಂದು ಚಿಂತಿಸಬೇಡ,
ಅದೃಷ್ಟವು ನಿನ್ನೆಡೆಗೆ ಬರುವವರೆಗು
ಕಾಯುವ ತಾಳ್ಮೆಯು ನಿನಗಿರಲಿ -ಅಗ್ರಜ
____

ಮಾವು, ಬೇವು ಉಗಾದಿಗೆ,
ನೋವು ನಲಿವು ದಿನ ನಿತ್ಯಕೆ
ಸಾವು ಪ್ರತಿಯೊಂದು ಜೀವಿಗೆ - ಅಗ್ರಜ
____

ಗುಣವಂತನಿಗೆ ಎಲ್ಲೆಡೆ ಮನ್ನಣೆ.
ಸದ್ಗುಣವಿಲ್ಲದವ ಕೇವಲ ಚರ್ಮದಿಂದ
ಮುಚ್ಚಿರುವ ಮಾಂಸದ ಮುದ್ದೆ - ಅಗ್ರಜ